ಉಚ್ಚoಗಿದುರ್ಗದಲ್ಲಿ ನಡೆದ ಸಪ್ತಪದಿ ಸರಳ ಸಾಮೂಹಿಕ ವಿವಾಹ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ರಾಜ್ಯ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ರಾಜ್ಯದ ಎ ಶ್ರೇಣಿ ದೇವಸ್ಥಾನಗಳಲ್ಲಿ ಮೇ.25 ರಂದು ಉಚಿತ ಸರಳ ಸಾಮೂಹಿಕ ವಿವಾಹಗಳು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರೂ,ಉಪಾಧ್ಯಕ್ಷರು,ಸದಸ್ಯರು, ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ವಿವಾಹಗಳು ಉಚ್ಚoಗೆಮ್ಮನ ದೇವಸ್ಥಾನ ಆವರಣದಲ್ಲಿ ನಡೆದವು.

ದೇವಸ್ಥಾನದವನ್ನು ಮಾವಿನ ಸಪ್ಪು, ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು.

ಈ ಸರಳ ಸಾಮೂಹಿಕ ವಿವಾಹದಲ್ಲಿ 04 ಜೋಡಿಗಳು ನೂತನ ಜೀವನಕ್ಕೆ ಕಾಲಿಟ್ಟಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆವತಿಯಿಂದ 40ಸಾವಿರ ಮೌಲ್ಯದ ಒಂದು ಚಿನ್ನದ ತಾಳಿ,ಎರಡು ಚಿನ್ನದ ಗುಂಡು ಹಾಗೂ ಹೆಣ್ಣಿಗೆ ಹತ್ತು ಸಾವಿರ ಹಾಗೂ ವರ ನಿಗೆ ಐದು ಸಾವಿರ ಹಣವನ್ನು ನೀಡಲಾಗಿತು.

ವಿವಾಹದಲ್ಲಿ ಭಾಗವಹಿಸಿದ ಭಕ್ತರೂ ಹಾಗೂ ಸoಬಂದಿಗಳಿಗೆ ಅನ್ನ ದಾಸೋಹವನ್ನು ದೇವಸ್ಥಾನದಿಂದ ಆಯೋಜಿಸಲಾಗಿತ್ತು….

ಈ ವೇಳೆ ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಸರ್ಕಾರದ ನಿರ್ದೇಶನದಂತೆ ಉಚಿತವಾಗಿ ಸಪ್ತಪದಿ ಸರಳ ವಿವಾಹವನ್ನು ಮಾಡಿದ್ದು ಇದರಿಂದ ತಂದೆ-ತಾಯಿಗಳು ಆರ್ಥಿಕ ಹೊರೆ ಕಡಿಮೆಯಾಗಲಿ ದೇವಿಯು ಎಲ್ಲರಿಗೂ ಸುಖ ಶಾಂತಿ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು…

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ, ಉಪಾಧ್ಯಕ್ಷರಾದ ರೇಣುಕಮ್ಮ, ಸದಸ್ಯರಾದ ಕೆಂಚ್ಚಪ್ಪ, ಯುವರಾಜ್ ,ಚಂಚೀಲಮ್ಮ, ಗ್ರಾಮಸ್ಥರಾದ ರಾಜಶೇಖರ್ ಗೌಡರು, ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು…

  • Related Posts

    ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ಶಿಬಿರ…

    ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ, ದಿವಂಗತ ಅಬ್ದುಲ್ ರೌಫ್ ಸಾಹೇಬ್ ಸ್ನರಣಾರ್ಥವಾಗಿ. 8ನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಫೆ1 ರಂದು ಹಿರೇಮಠ ಕಲ್ಯಾಣ ಮಂಟಪದಲ್ಲಿ ಜರುಗಿತು. ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ…

    ಕೂಡ್ಲಿಗಿ ತಾಲೂಕಾಡಳಿತದಿಂದ ಶ್ರೀಮಾಚಿದೇವರ ಜಯಂತಿ…

    ವಿಜಯನಗರ ಜಿಲ್ಲೆ ಕೂಡ್ಲಿಗಿ: ಅರಸ ಮೇಲಲ್ಲ ಅಗಸ ಕೀಳಲ್ಲ, ಅವರವರ ಕಾಯಕ ಅವರವರಿಗೆ ಶ್ರೇಷ್ಠವಾದದ್ದು ಎಂದು. ಕಾಯಕತನದ ಮಹತ್ವ ಹಾಗೂ ಸಮಾನತೆಯನ್ನು ಸಾರಿದ, ಮಡಿವಾಳ ಶ್ರೀಮಾಚಿದೇವರು ಶರಣರ ಶರಣರಾಗಿದ್ದಾರೆ. ಅವರ ವಚನಗಳು ಸರ್ವ ಕಾಲಕ್ಕೂ ಪ್ರಸ್ತುತ, ಹಾಗೂ ಸರ್ವರಿಗೂ ದಾರಿ ದೀಪವಾಗಿವೆ…

    Leave a Reply

    Your email address will not be published. Required fields are marked *

    error: Content is protected !!