
ದಿನಾಂಕ:25.03.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು ಎಂ ಎಸ್ ದೇವಕರವರು, ಹಡಗಲಿ & ಹರಪನಹಳ್ಳಿ ತಾಲೂಕಿನ ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಗೈರು ವಿಲೇ ಸಮಿತಿ ಸಭೆ ನಡೆಸಿ, ಭೂ ಮಂಜೂರಾತಿ ಪ್ರಕರಣಗಳಲ್ಲಿ ಮಿಸ್ಸಿಂಗ್ ಕಡತಗಳ ನಿರ್ವಹಣೆ ಹಾಗೂ ಸ್ಥಾನಿಕ ವರದಿಗಳನ್ನು ಸೇರಿದಂತೆ ಸಭೆ ನಡೆಸಲಾಯಿತು.

ಹಾಗೂ ಪೂರಕ ದಾಖಲೆಗಳನ್ನು ಹೊಂದಿರುವ ಕಡತಗಳನ್ನು ಆದ್ಯತೆ ಮೇರೆಗೆ ಸಮಿತಿಯಲ್ಲಿ ಮಂಡಿಸಲು ಹಾಗೂ ಸದರಿ ಕಡತಗಳ ಬಗ್ಗೆ ಮತ್ತೊಮ್ಮೆ ಅಭಿಲೇಖಾಲಯಗಲ್ಲಿ ಶೋಧನೆ ಮಾಡಲು ಸೂಚಿಸಿದರು ಮತ್ತು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿರುವ ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುವಂತೆ ತಿಳಿಸಿದರು.










