
ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಗೌರವ-ಸನ್ಮಾನ ಸ್ವೀಕರಿಸಿದರು.

ಇದೇ ಸಮಯದಲ್ಲಿ ಕಾಮಗಾರಿಯ ಉಳಿದ ಕಂತಿನ ಹಣವನ್ನು ಆದಷ್ಟೂ ಬೇಗ ಬಿಡುಗಡೆಗೊಳಿಸುವುದಾಗಿ ಗ್ರಾಮಸ್ಥರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು .

ಈ ವೇಳೆಯಲ್ಲಿ ಶಂಕರಗೌಡ ಪಾಟೀಲ, ನಿಲೇಶ ಚಂದಗಡ್ಕರ್, ವಸಂತರಾವ ಜಾಧವ್, ಪ್ರಭಾಕರ್ ಹುಲಕುಂದ, ಪ್ರವೀಣ ಮುರಾರಿ, ರೇಣುಕಾ ಕರವಿನಕೊಪ್ಪ, ಕಲ್ಲಪ್ಪ ಧರೆಣ್ಣವರ, ನಾಗೇಶ ದೇಸಾಯಿ, ಉಮೇಶ್ ದೇಶಪಾಂಡೆ, ಗಣಪತಿ ಬಾಲಣ್ಣವರ್, ಸುರೇಶ ಪಗಡಿ, ರಾಮಣ್ಣ ರಾಮಚನ್ನವರ್ ಉಪಸ್ಥಿತರಿದ್ದರು.







