ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ನಡೆದ ಭರ್ಜರಿ ಪ್ರಚಾರ 

ದಾವಣಗೆರೆ ಮಹಾನಗರ ಪಾಲಿಕೆಯ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ಇಂದು ನಡೆದ ಪ್ರಚಾರ ಸಭೆ ಜನಸ್ತೋಮದಿಂದ ಕಂಗೊಳಿಸುತ್ತಿತ್ತು,

ದಾವಣಗೆರೆಯನ್ನು ನವೀಕರಣಗೊಳಿಸ ಬೇಕೆಂಬ ಹಂಬಲವನ್ನು ಹೊತ್ತು ಅದರ ಆಧುನಿಕತೆಗೆ ಹಗಲಿರುಳು ಶ್ರಮಿಸುತ್ತಿರುವ” ದಾವಣಗೆರೆ ಆಧುನೀಕರಣದ ಹರಿಕಾರ” ರೆನಿಸಿದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು ಸಭೆಗೆ ಆಗಮಿಸುತ್ತಿದ್ದಂತೆ ನೆರೆದ ಸಹಸ್ರಾರು ಸಂಖ್ಯೆಯ ಜನರಲ್ಲಿ ವಿದ್ಯುತ್  ಸಂಚಾರವಾದಂತಾಯಿತು.

ಡೊಳ್ಳು  ಕುಣಿತ ಹಾಗೂ ಜನಸ್ತೋಮದ ನಡುವೆ ಹಾರಾಡುತ್ತಿದ್ದ ಸಹಸ್ರಾರು ಧ್ವಜಗಳು ಜನರ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡಿತ್ತು, ಈ ಪ್ರಚಾರ ಸಭೆಗೆ  ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ,ಅಭ್ಯರ್ಥಿ ರೇಖಾರಾಣಿ ಸಿದ್ದಗಂಗಾ ಶಿವಣ್ಣ, ಮತ್ತು ಡಿ.ಎಸ್.ಹೇಮಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪ,ಮುಖಂಡರಾದ ದಿನೇಶ್.ಕೆ.ಶೆಟ್ಟಿ,ಗಡಿಗುಡಾಲ್ ಮಂಜಣ್ಣ, ಎ.ನಾಗರಾಜ್,ಮುದೇಗೌಡ್ರು ಗಿರೀಶ್, ಡಿ.ಬಸವರಾಜ್,ಆರ್.ಎಸ್.ಶೇಖರಪ್ಪ,ಆರ್.ಹೆಚ್.ನಾಗಭೂಷಣ್, ಕೆ.ಜಿ.ಶಿವಕುಮಾರ್,ಸೈಯದ್ ಸೈಫುಲ್ಲ,ಡೋಲಿ ಚಂದ್ರು,ಅನಿತಾಬಾಯಿ,ಗಜೇಂದ್ರ,ತಿಪ್ಪೆಶ್,ಬೀಡಾ ಪ್ರಕಾಶ್,ಪರಮೇಶ್,ಚಂದ್ರು,ಸೈಯದ್ ಖಾಲಿದ್ ಅಹ್ಮದ್ ಇನ್ನೂ ಅನೇಕ ಮುಖಂಡರು, ಅಭಿಮಾನಿಗಳು,ಕಾರ್ಯಕರ್ತರು ಭಾಗವಹಸಿದ್ದರು.

HEAD

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!