

ಕೆ ಆರ್ ಪೇಟೆ: ಫೆಬ್ರವರಿ 8 ರಂದು ಪಿ ಎಲ್ ಡಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ 13ನೇ ವೃತ್ತ (ಮಂದಗೆರೆ ಮತ್ತು ಬಿರುವಳ್ಳಿ ವ್ಯಾಪ್ತಿಯ) ದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪವಿತ್ರ ಎಲ್, ಸಿ ರೇವಣ್ಣ ಅವರು ಇಂದು ಚುನಾವಣಾ ಅಧಿಕಾರಿ ತಾ.ಪಂ ಇ ಒ ಸುಷ್ಮಾ ಅವರಿಗೆ ಪಿ ಎಲ್ ಡಿ ಬ್ಯಾಂಕ್ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಜಾನಕೀರಾಮ್,ಅಧ್ಯಕ್ಷ ಸಾರಂಗಿ ನಾಗಣ್ಣ,ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್,ಮಾಜಿ ಸಚಿವ ನಾರಾಯಣಗೌಡ ಆಪ್ತ ಸಹಾಯಕ ದಯಾನಂದ್,ಬಂಡಿಹೊಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ದರ್ಶನ್,ಯುವ ಮುಖಂಡ ನಾಟನಹಳ್ಳಿ ದಿಲೀಪ್,ರೇವಣ್ಣ ಸೇರಿದಂತೆ ಉಪಸ್ಥಿತರಿದ್ದರು.