ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಅವರನ್ನು ಭೇಟಿ ಮಾಡಿ ಹೊನ್ನಾಳಿ ಮಾಜಿ ಶಾಸಕ‌

ಇಂದು ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರು, ಆತ್ಮೀಯರಾದ ಎನ್.ಎಸ್. ಬೋಸರಾಜು ಅವರನ್ನು ಮಾಜಿ ಶಾಸಕ‌ ಎಂ.ಪಿ ರೇಣುಕಾಚಾರ್ಯರವರು ಭೇಟಿ ಮಾಡಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 22 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರಕಿದ್ದರೂ ಕಾಮಗಾರಿಗಳು ಚಾಲನೆಯಾಗಿರುವುದಿಲ್ಲ, ಈ ಹಿನ್ನೆಲೆಯಲ್ಲಿ ಸಚಿವರನ್ನು ಭೇಟಿ ಮಾಡಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಮನವಿ ಮಾಡಲಾಯಿತು, ಕೂಡಲೇ ಸಚಿವರು ಸಂಬಂಧ ಪಟ್ಟ ಇಲಾಖೆಯ ಮುಖ್ಯ ಇಂಜಿನಿಯರ್ ಗೆ ಪೋನ್ ಮಾಡಿ ಸೂಚನೆ ನೀಡಿದರು.


ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು‌ ಈ ವೇಳೆ ಶಾಸಕರಾದ ಪ್ರಕಾಶ್ ಕೋಳಿವಾಡ ಇದ್ದರು.

ಕಾಮಗಾರಿಗಳ ವಿವರ :

  1. ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಿರೆಕೆರೆ ಕೋಡಿ ನಾಲೆ ದುರಸ್ಥಿ 5 ಕೋಟಿ ರೂ ( ಟೆಂಡರ್ ಹಂತದಲ್ಲಿದೆ )
  2. ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಸ.ನಂ.103 ಕ್ಕೆ ಕೋಡಿ ಹಳ್ಳದ ಪ್ರವಾಹ ಹಾನಿ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
  3. ನ್ಯಾಮತಿ ತಾಲೂಕಿನ ಹಳೆಜೋಗ ಸಮೀಪದ ತಾವರೆಕೆರೆಯ ಕೋಡಿಹಳ್ಳ ಹಾಗೂ ರಂಗಪಟ್ಟಣ ಕೆರೆಯ ಫೀಡರ್ ನಾಲೆಗಳಿಂದ ಪ್ರವಾಹ ಹಾನಿ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
  4. ಹೊನ್ನಾಳಿ ತಾಲೂಕಿನ ಹನುಮಸಾಗರ ಹತ್ತಿರ ಚೆಕ್ ಡ್ಯಾಂ ಹಿಂಭಾಗ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ‌ )
  5. ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ‌ಗ್ರಾಮದಲ್ಲಿನ ಹಳ್ಳಕ್ಕೆ ತಡೆಗೋಡೆ ನಿರ್ಮಾಣ 6 ಕೋಟಿ ರೂ, ( ಟೆಂಡರ್ ಪ್ರಕ್ರಿಯೆಯಲ್ಲಿದೆ)
  6. ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಮಾವಿನಕೋಟೆ ಗ್ರಾಮದ ಸ.ನಂ.36 ರ ಕುಳಗಟ್ಟೆ ಕ್ರಾಸ್ ನಲ್ಲಿ ಬರುವ ಜಮೀನಿನಲ್ಲಿ ಹಳ್ಳಕ್ಕೆ ಸಿಮೆಂಟ್ ಕಾಂಕ್ರಿಟ್ ವಾಲ್ ನಿರ್ಮಾಣ ಕಾಮಗಾರಿ 40 ಲಕ್ಷ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
  7. ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಬೊಮ್ಮೇನಹಳ್ಳಿ ಗ್ರಾಮದ ಸ.ನಂ.10 ರ ಕುಳಗಟ್ಟೆ ಕ್ರಾಸ್ ನಲ್ಲಿ ಬರುವ ಶ್ರೀ ಹರೀಶ್ ಬಿನ್ ಲಿಂಗಪ್ಪ ರವರ ಜಮೀನಿನಲ್ಲಿ ಹಳ್ಳಕ್ಕೆ ಸಿಮೆಂಟ್ ಕಾಂಕ್ರೀಟ್ ವಾಲ್ ನಿರ್ಮಾಣ 40 ಲಕ್ಷ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
  8. ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ವಡಗಟ್ಟಿ ಕೆರೆ ಕೋಡಿಹಳ್ಳಕ್ಕೆ ತಡೆ ಗೋಡೆ ನಿರ್ಮಾಣ 50 ಲಕ್ಷ ( ಟೆಂಡರ್ ಪ್ರಕ್ರಿಯೆಯಲ್ಲಿದೆ )
  9. ನ್ಯಾಮತಿ ತಾಲೂಕಿನ ಕಂಕನಹಳ್ಳಿ- ಕೊಡಚಗೊಂಡನಹಳ್ಳಿ ಗ್ರಾಮದ ಬಳಿ ಹಿರೇಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ 2 ಕೋಟಿ ರೂ ( ಟೆಂಡರ್ ಹಂತದಲ್ಲಿದೆ )
  10. ನ್ಯಾಮತಿ ತಾಲೂಕಿನ ದಾನಿಹಳ್ಳಿ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ 3 ಕೋಟಿ ರೂ ( ಟೆಂಡರ್ ಹಂತದಲ್ಲಿದೆ ).
  • Related Posts

    ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮದ ಅರಿವು ಮೂಡಿಸಿ ಅಪಘಾತ ತಪ್ಪಿಸಿ : ಜಿ.ಜಗದೀಶ್

    ಬೆಂಗಳೂರು ನಗರ ಜಿಲ್ಲೆ, ಜನವರಿ 31 ಬೆಂಗಳೂರು ನಗರದಲ್ಲಿ ಅತಿ ವೇಗದ ವಾಹನ ಚಾಲನೆಯಿಂದಾಗಿ ಅಪಘಾತ ಹೆಚ್ಚಾಗುತಿರುವ ಕಾರಣ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಅರಿವು ಮೂಡಿಸಿ ಎಂದು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ…

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಸಭೆ

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು…

    Leave a Reply

    Your email address will not be published. Required fields are marked *

    error: Content is protected !!