

ದಾವಣಗೆರೆ, ಸೆ.01: ದಾವಣಗೆರೆ ನಗರದ ಪಿ.ಜೆ.ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನಾ ಮಹೋತ್ಸವಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಲತಿಕಾ ಡಿ.ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ರಾಮಚಂದ್ರ ಭಟ್ಟರು, ಪಂಚಪ್ಪ ತೆರದಾಳ್, ಪ್ರಭು, ವಿಜಯಕುಮಾರ್ ಜೈನ್, ರಾಜು ಭಂಡಾರಿ, ಮಧು ಪವರ್, ವೆಂಕಟೇಶ್, ರಾಜು ಚೌಹಾಣ್, ಜಗದೀಶ್, ಪರಶುರಾಮ್, ಸಿರಿಲ್ ಪ್ರದೀಪ್, ಯುವರಾಜ್ ಮುಂತಾದವರು ಇದ್ದರು.