ಕೇರ್ ಮಾಡಲ್ಲ, ಕಾಲ್ ರಿಸೀವ್ ಮಾಡಲ್ಲ ಎಂದ ಶಾಸಕ ….!ಒಂದೊಂದೆ ಮೆಟ್ಟಿಲು ಹತ್ತೋದು ಒಳ್ಳೆಯದು ಎಂದ ಸಚಿವರು ..

ಶಾಸಕ ಶಿವಗಂಗಾ ಬಸವರಾಜ್, ಸಚಿವರು ಕೈಗೆ ಸಿಗಲ್ಲ, ಫೋನೂ ರಿಸಿವ್ ಮಾಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಶಾಸಕರ ಮೇಲೆ ಅಸಮಧಾನ ಹೊರ ಹಾಕಿದ್ರು, ನನಗೆ ರೇಣುಕಾಚಾರ್ಯ ಅವರ ಹಾಗೆ ಸಚಿವರ ಬಾಗಿಲು ಕಾಯೋದು ಆಗೋದಿಲ್ಲ, ಶಾಸಕರ ಅಭಿವೃದ್ಧಿ ವಿಚಾರಕ್ಕೆ ಕರೆ ಮಾಡಿದಾಗ ಅದಕ್ಕೆ ರೆಸ್ಪಾನ್ಸ್ ಮಾಡಬೇಕು, ಕಾಂಗ್ರೆಸ್ ನಲ್ಲಿ 135 ಶಾಸಕರು ಇದ್ದೇವೆ, 135 ಶಾಸಕ ನಂಬರ್ ಹಿಡಿಯುವಷ್ಟು ಎಲ್ಲರ ಮೊಬೈಲ್ ಜಾಗವಿರುತ್ತದೆ, ಎಲ್ಲರ ನಂಬರ್ ಸೇವ್ ಮಾಡಿಕೊಂಡು ಅದಕ್ಕೆ ರೆಸ್ಪಾನ್ಸ್ ಮಾಡಬೇಕು, ಅವರು ತಮ್ಮ ತಪ್ಪನ್ನ ತಿದ್ದಿಕೊಳ್ಳಬೇಕು ಅಂತ ಅವರಿಗೆ ಹೇಳಿದ್ದೇನೆ, ಅವರು ಮತ್ತೆ ತಮ್ಮ ತಪ್ಪನ್ನು ತಿದ್ದಿಕೊಳ್ಳದೆ ಇದ್ದರೆ ಮತ್ತೆ ಮಾಧ್ಯಮದ ಮುಂದೆ ಬರುತ್ತೇನೆ ಎಂದು ಬಹಿರಂಗವಾಗಿಯೇ ಚನ್ನಗಿರಿಯಲ್ಲಿ ಶಾಸಕ ಬಸವರಾಜ್ ಶಿವಗಂಗಾ ಅಸಮಾಧಾನ ಹೊರ ಹಾಕಿದ್ದರು..

ಚನ್ನಗಿರಿ ತಾಲೂಕಿನ ಹಿರೇಗಂಗೂರ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡ ಸಚಿವರು, ತುಂಬಿದ ಸಭೆಯಲ್ಲೇ ತೀಕ್ಷವಾಗಿ‌ ಮಾತನಾಡಿದರು, ಸಚಿವರು ಕೈಗೆ ಸಿಗೋದಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ, ಈಗ ನಿಮಗಲ್ಲ ಬೇರೆ ಸಚಿವರಿಗೆ ಹೇಳಿದ್ದು ಎಂದು ಹೇಳಿದ್ದಾರೆ, ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿಯಾಗಿದ್ದೆ ಮೂವರನ್ನ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ನನ್ನನ್ನು, ಈ ಮೂವರಿಗೆ ಹೇಳಿರಬೇಕು, ಡಿಕೆ ಶಿವಕುಮಾರ್ ಗೆ ಹೇಳಿದ್ರಾ ಅಥವಾ ನನ್ನ ಮೇಲೆ ಆರೋಪ ಮಾಡಿದ್ರಾ ಗೊತ್ತಿಲ್ಲ, ಹೀಗ ನಿಮಗೆ ಅಲ್ಲ ಅಣ್ಣ ಎಂದು ಹೇಳಿದ್ದಾನೆ ಎಂದು ವೇದಿಕೆ ಮೇಲೆ ಕಾಂಗ್ರೆಸ್ ನೂತನ ಶಾಸಕ ಬಸವರಾಜ್ ಗೆ ಸಚಿವ ಮಲ್ಲಿಕಾರ್ಜುನ್ ಕ್ಲಾಸ್ ತೆಗೆದುಕೊಂಡರು,

ಬಸವರಾಜ್ ಬಹಳ ಬೇಗ ಶಾಸಕ ಆಗಿದ್ದಾನೆ, ಯುವಕ, ಬಹಳ ಆ್ಯಕ್ಟಿವ್ ಇದ್ದಾನೆ, ದಿಢೀರ್ ಮೆಟ್ಟಿಲು ಹತ್ತೋಕೆ ಹೋಗ್ತಿದ್ದಾನೆ, ಒಂದೊಂದೆ ಮೆಟ್ಟಿಲು ಹತ್ತೋದು ಒಳ್ಳೆಯದು, ಸಚಿವರು ಕಾಲ್ ರಿಸೀವ್ ಮಾಡಲ್ಲ, ಕೈಗೆ ಸಿಗಲ್ಲ ಅಂತಾನೆ, ಯಾವ್ ಸಚಿವರು ಅಂತ ಕೇಳಿದ್ರೆ ನೀವ್ ಅಲ್ಲ ಅಂತಾನೆ, ಏನ್ ನನಗೆ ಹೇಳಿದ್ನೋ, ಡಿಕೆಶಿಗೋ, ಸಿಎಂಗೋ ಗೊತ್ತಿಲ್ಲ, ಯಾಕಂದ್ರೆ ರೇಣುಕಾಚಾರ್ಯ ಭೇಟಿಯಾಗಿದ್ದು ನನಗೆ, ಡಿಕೆಶಿ, ಸಿಎಂಗೆ, ಜನರ ಜೊತೆ ಒಳ್ಳೆಯ ಕೆಲಸ ಮಾಡು, ಒಳ್ಳೆಯ ಶಾಸಕನಾಗು ಎಂದು ಮಲ್ಲಿಕಾರ್ಜುನ್ ವೇದಿಕೆ ಮೇಲೆ ಪಾಠ ಹೇಳಿದ್ದಾರೆ..

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!