ಬೆಣ್ಣೆ ನಗರಿಯಲ್ಲಿ ಹೆಚ್ಚಾಗುತ್ತಿದೆ ಸಿಜೇರಿಯನ್,,

ದಾವಣಗೆರೆ: ಇಂದು ವೈದ್ಯಕೀಯ ಕ್ಷೇತ್ರ ನಿತ್ಯ ಹೊಸ ಪ್ರಯೋಗಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಆದರೆ ಸಹಜ ಹೆರಿಗೆ ವಿಚಾರದಲ್ಲಿ ಈ ಪ್ರಯೋಗ ಅದೇಕೊ ವಿಫಲವಾದಂತೆ ಕಾಣುತ್ತಿದೆ. ಇದು ವೈದ್ಯಕೀಯ ಮಾಫಿಯಾವೋ ಅಥವಾ ತಾಯಿ ಮತ್ತು ಮಗುವಿನ ಜೀವ ಉಳಿಸುವ ವೈದ್ಯರ ಅಂತಿಮ ಆಯ್ಕೆಯೋ ಎನ್ನುವ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ. ಕಳೆದ 1 ವರ್ಷದಲ್ಲಿ ಜಿಲ್ಲೆಯಲ್ಲಿ ಆಗಿರುವ ಗರ್ಭಿಣಿ ಮಹಿಳೆಯರ ಹೆರಿಗೆಯ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಇಂಥಹದೊAದು ಪ್ರಶ್ನೆ ಕಾಡದೇ ಇರದು. ಕಳೆದ 5 ವರ್ಷದ ಹಿಂದೆ ಸಿಜೇರಿಯನ್ ಪ್ರಮಾಣ ಶೇ.15 ರಿಂದ 20 ಇತ್ತು. ಆದರೆ 2022-23 ನೇ ಸಾಲಿನಲ್ಲಿ ಈ ಪ್ರಮಾಣ ಶೇ.35 ಕ್ಕೆ ಹೆಚ್ಚಳಗೊಂಡಿದೆ.

ಜಿಲ್ಲೆಯಲ್ಲಿ ಹೆರಿಗೆಗಾಗಿಯೇ ಚಿಗಟೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕೆ.ಆರ್. ಮಾರ್ಕೆಟ್ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳು, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕು ಆಸ್ಪತ್ರೆಗಳು, 4 ಸಮುದಾಯ ಆಸ್ಪತ್ರೆಗಳು, 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಸರ್ಕಾರಿ ವಲಯದ 35 ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯಗಳಿವೆ. 15 ಖಾಸಗಿ ಹೆರಿಗೆ ಆಸ್ಪತ್ರೆಗಳಿವೆ. ಇಲ್ಲಿ ನಡೆಯುತ್ತಿರುವ ಹೆರಿಗೆಗಳಲ್ಲಿ ಶೇ.35ಕ್ಕೂ ಅಧಿಕ ಹೆರಿಗೆಗಳು ಸಿಜೇರಿಯನ್ ಆಗಿವೆ ಎನ್ನುತ್ತಾರೆ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ.

ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಒಟ್ಟು ಹೆರಿಗೆಗಳ ಸಂಖ್ಯೆ 25,707. ಇದರಲ್ಲಿ 9011 ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಕಳೆದ 5 ವರ್ಷದ ಅಂಕಿ ಸಂಖ್ಯೆ ಗಮನಿಸಿದರೆ ಶೇ 15 ರಿಂದ 20 ಇದ್ದ ಈ ಪ್ರಮಾಣ ಈ ವರ್ಷ 35 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಿಜೇರಿಯನ್ ಹೆರಿಗೆ ಪ್ರಮಾಣ ಶೇ.10 ರಿಂದ 15 ಕ್ಕೆ ಏರಿದೆ. ಇದು ಸಹಜವಾಗಿಯೇ ಯೋಚನೆ ಮಾಡಬೇಕಾದ ಸಂಗತಿ ಎನ್ನುತ್ತಾರೆ ಡಾ.ಮೀನಾಕ್ಷಿ.

ಕಳೆದ ವರ್ಷ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 7 ಸಾವಿರ ಹೆರಿಗೆ ಆಗಿದ್ದರೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಸಿಜೇರಿಯನ್ ಹೆರಿಗೆ ಇವೆ. ಇದಕ್ಕೆ ಹಲವು ಕಾರಣಗಳಿವೆ. `ಗರ್ಭಿಣಿಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಹಿತ ವಿವಿಧ ಕಾಯಿಲೆಗಳಿದ್ದರೆ, ಗರ್ಭದಲ್ಲಿ ಅವಳಿ ಶಿಶುಗಳಿದ್ದರೆ ಹೆಚ್ಚು ಅಪಾಯವನ್ನು ಆಹ್ವಾನಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ವೈದ್ಯರು ಸಿಜೇರಿಯನ್‌ಗೆ ಶಿಫಾರಸು ಮಾಡುತ್ತಾರೆ. ಆದರೆ, ಸಾಮಾನ್ಯವಾಗಿ ಈ ಪ್ರಮಾಣ ಶೇ 10ರಿಂದ ಶೇ 12 ರಷ್ಟೇ ಇರುತ್ತಿತ್ತು.

ಆದರೆ ಜನಮಾನಸದಲ್ಲಿ ಸಿಜೇರಿಯನ್ ಹೆರಿಗೆಗಳ ಬಗ್ಗೆ ಬೇರೆಯದೇ ಅನಿಸಿಕೆಗಳಿವೆ. “ಅಯ್ಯೋ ನಮ್ಮ ಮಗಳು, ಸೊಸೆ, ನಾರ್ಮಲ್ ಹೆರಿಗೆಗೆ ರೆಡಿ ಇದ್ದಳು. ಡಾಕ್ಟರ್ ರಿಕ್ಸ್ ಇದೆ ಎಂದು ಸಿಜೇರಿಯನ್ ಮಾಡಿದರು” ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ. ಒಂದು ಕಾಲದಲ್ಲಿ ಎಂಟತ್ತು ಮಕ್ಕಳನ್ನು ಸಹಜವಾಗಿಯೇ ಮಹಿಳೆಯರು ಹೆರುತ್ತಿದ್ದರು. ಇಂದು ಒಂದೇ ಮಗುವನ್ನು ತಾಯಿಯ ಗರ್ಭವನ್ನೇ ಸೀಳಿ ಹೊರತರುವ ಸ್ಥಿತಿ ಇದೆ. ವೈದ್ಯಕೀಯ ಸಾಕಷ್ಟು ಕ್ಷೇತ್ರ ಮುಂದುವರಿದಿದೆ. ಆದರೆ ನೋವು ಸಹಿಸಿಕೊಳ್ಳುವ ಮಾನಸಿಕತೆ ಇಂದಿನ ತಾಯಂದಿರಿಗಿಲ್ಲ ಎನ್ನುವಂತಾಗಿದೆ.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!