

August 18, ದಾವಣಗೆರೆಯ ಜಿಲ್ಲಾ ಗುರುಭವನದಲ್ಲಿ ಹಿಂದಿನಿಂದ ಎರಡು ದಿನಗಳ ಕಾಲ ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗಿನ ಕ್ಯಾಮರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು .

ಪ್ರದರ್ಶನದಲ್ಲಿ ಗಾಂಧೀಜಿಯವರ ಚಿತ್ರ ಸೆರೆಹಿಡಿದಿದ್ದ ಕ್ಯಾಮರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಈ ಪ್ರದರ್ಶನವೂ ಸಾರ್ವಜನಿಕರ ವಿದ್ಯಾರ್ಥಿಗಳ ಗಮನ ಸೆಳೆಯಿತು. ವಿಶೇಷವಾಗಿ 1942ರಲ್ಲಿ ಮಹಾತ್ಮ ಗಾಂಧೀಜಿಯವರು ದಾವಣಗೆರೆಗೆ ಆಗಮಿಸಿದ ವೇಳೆ ಅವರ ಚಿತ್ರವನ್ನು ಸೆರೆಹಿಡಿದಿದ್ದ ಕ್ಯಾಮೆರಾ ಆಕರ್ಷಣೆಯ ಕೇಂದ್ರವಾಗಿತ್ತು ಹಿರಿಯ ಛಾಯಾಗ್ರಹಕ ಹೆಚ್ ಬಿ ಮಂಜುನಾಥ್ ಕ್ಯಾಮೆರಾಗಳ ಬಗ್ಗೆ ಮಾಹಿತಿ ನೀಡಿದರು.
1920 ರಿಂದ 2023 ನೇ ಇಸ್ವಿಯವರಗಿನ 120ಕ್ಕೂ ಹೆಚ್ಚು ಬಗೆಯ ಕ್ಯಾಮೆರಾಗಳನ್ನು ಪ್ರದರ್ಶನದಲ್ಲಿದ್ದವು.