
ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಇಂದು ಪಟ್ಟಣದ ಜೋಡು ಕೆರೆಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.
ಪುರಸಭೆ ವತಿಯಿಂದ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಪುರಸಭೆ ಮುಖ್ಯಾಧಿಕಾರಿ ಶ್ರೀ ಅಶೋಕ ಗುಡಿಮನಿಯವರು ಕೆರೆಗಳಿಗೆ ಸಂಬಂಧಿಸಿದ ಸುಧಾರಣೆ ಕಾರ್ಯಗಳ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಅಥಣಿ ಪಟ್ಟಣದ ಮಧ್ಯಭಾಗದಲ್ಲಿರುವ ಐತಿಹಾಸಿಕ ಜೋಡು ಕೆರೆಗಳ ಅಭಿವೃದ್ಧಿಯನ್ನು ಮಾದರಿಯಾಗುವಂತೆ ಅಭಿವೃದ್ಧಿಪಡಿಸಲು ಡಿ.ಪಿ.ಆರ್. ತಯಾರಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ಸಾರ್ವಜನಿಕ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಗಳ ಸೌಂದರ್ಯೀಕರಣಗೊಳಿಸುವ ಕುರಿತು ಹಾಗೂ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ಮುಖ್ಯಾಧಿಕಾರಿಯವರಿಗೆ ಸಲಹೆ, ಸೂಚನೆ ನೀಡಿದರು. ಪಟ್ಟಣದಲ್ಲಿ ಮುಖ್ಯಾಧಿಕಾರಿ ಶ್ರೀ ಅಶೋಕ ಗುಡಿಮನಿಯವರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀ ಸಂತೋಷ ಸಾವಡಕರ, ಶ್ರೀ ದತ್ತಾ ವಾಸ್ಟರ್, ಶ್ರೀ ರಾಜು ಗುಡೋಡಗಿ, ಶ್ರೀ ಆಶೀಫ್ ತಾಂಬೋಳಿ, ಶ್ರೀ ಪ್ರಮೋದ ಬಿಳ್ಳೂರ, ಶ್ರೀ ಉದಯಕುಮಾರ ಸೊಳಸಿ, ಶ್ರೀ ರಿಯಾಜ್ ಸನದಿ, ಶ್ರೀ ಮಲ್ಲಿಕಾರ್ಜುನ ಬುಟಾಳಿ, ಶ್ರೀ ವೆಂಕಟೇಶ ದೇಶಪಾಂಡೆ, ಶ್ರೀ ತಿಪ್ಪಣ್ಣ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಹಳ ದಿನಗಳ ಬೇಡಿಕೆ ಮತ್ತು ನಮ್ಮ ಅನಿಸಿಕೆ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….







