ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ;

ಜಿಲ್ಲೆಯ ಪ್ರತಿ ಆರ್.ಎಸ್ ಕೆ.ದಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿ ನಿರ್ವಹಿಸಲು ನಿರ್ದೇಶನ ನೀಡಿದ ಡಿಸಿ.

ಧಾರವಾಡ ಜ.31: ಇಂದು ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ ಭವನ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳು ಆಗಮಿಸುವ ಅಂದಾಜು ಇಲ್ಲದೆ, ಇದ್ದ ಅಧಿಕಾರಿಗಳಿಗೆ, ಅವರ ಆಗಮನ ಸಿಬ್ಬಂದಿಗಳಲ್ಲಿ ಆಶ್ಚರ್ಯ, ಸ್ವಲ್ಪ ಗೊಂದದಿಂದ, ಕೇಂದ್ರಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಯಾರಪ್ಪ ಇದ್ದಿರಿ, ಏನ್ ಕೆಲಸ ಮಾಡುತ್ತಿದ್ದಿರಿ, ರೈತರು ಬರತ್ತಾರಾ, ಏನು? ಎಂದು ಅಧಿಕಾರಿಗಳ ವಿಚಾರಣೆ ಆರಂಭಿಸಿದರು.

ಸ್ಥಳದಲ್ಲಿ ಹಾಜರಿದ್ದ ಕೃಷಿ ಅಧಿಕಾರಿ ಮಹಾದೇವ ಸರಶೆಟ್ಟಿ ಅವರು, ಕೇಂದ್ರದ ಕಾರ್ಯ ಚಟುವಟಿಗಳನ್ನು ವಿವರಿಸಿದರು. ಧಾರವಾಡ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ 11 ಗ್ರಾಮ ಪಂಚಾಯತಿಗಳು, 59 ಗ್ರಾಮಗಳು ಬರುತ್ತವೆ. ಅಂದಾಜು 11 ಸಾವಿರ ರೈತರಿದ್ದಾರೆ. ಅವರಿಗೆ ಇಲಾಖೆ ಸೇವೆಗಳನ್ನು ನಿಯಮಿತವಾಗಿ ಹಂಗಾಮವಾರು ತಲುಪಿಸುತ್ತಿದ್ದೇವೆ ಎಂದು ಹೇಳಿದರು.

ಆಗ ಜಿಲ್ಲಾಧಿಕಾರಿಗಳು ನಿಮ್ಮ ಆರ್.ಎಸ್.ಕೆ. ವ್ಯಾಪ್ತಿಯಲ್ಲಿ ಎಷ್ಟು ಜನ ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ. ಅವರಿಗೆ ಯಾವ ರೀತಿ ಆಧ್ಯತೆ ಮೇರೆಗೆ ಇಲಾಖೆಯ ಸೌಲಭ್ಯ, ಯೋಜನೆಗಳನ್ನು ತಲುಪಿಸುತ್ತಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸದ ಅಧಿಕಾರಿಗಳಿಗೆ ಇಲಾಖೆಯ ಮೂಲ ಮಾಹಿತಿ ತಮಗೆಲ್ಲರಿಗೂ ಬಾಯಿಪಾಠ ಇರಬೇಕು. ಇಲಾಖೆಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಪ್ರತಿನಿಧಿಸಬೇಕು.

ಆರ್.ಎಸ್.ಕೆ ಗೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಅವರು ಔಷಧಿ, ಬೀಜ, ಗೋಬ್ಬರ, ಕಳೆನಾಶಕ, ಬೆಳೆ ಟಾನಿಕ್, ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು, ಕೀ ಹಾಕಿದ್ದ ಗೋದಾಮು ಗಮನಿಸಿ, ಸಿಬ್ಬಂದಿ ಕೀ ತರುವವರೆಗೆ ಕಾಯ್ದು, ಅದನ್ನು ತೆರೆಯಿಸಿ ದಾಸ್ತಾನು ಪರಿಶೀಲಿಸಿದರು.

ಗೋದಾಮುವಿನಲ್ಲಿದ್ದ, ಸಣ್ಣ ಮತ್ತು ಅತಿ ಸಣ್ಣ ರೈತರು ಕಳೆ ತೆಗೆಯಲು ಬಳಸಬಹುದಾದ ಸೈಕಲ್ ವೀಡರ್‍ಗಳ ಕುರಿತು, ಎತ್ತು ಚಾಲಿತ ಎಡೆಕುಂಟೆಗಳ ಸಾಕಷ್ಟು ದಾಸ್ತಾನು ಇರುವದನ್ನು ಮಾಹಿತಿ ಪಡೆದರು. ರೈತರಿಗೆ ರಿಯಾಯಿತಿ ದರದಲ್ಲಿ ದರದಲ್ಲಿ ಯಾಂತ್ರಿಕರಣ ಯೋಜನೆಯಡಿ ವಿತರಿಸುತ್ತಿರುವ ಹೈಟೆಕ್ ಯಂತ್ರೋಪಕರಣಗಳ ಕುರಿತು ಮಾಹಿತಿ ಪಡೆದರು ಹಾಗೂ ಕೂರಿಗೆ ರೊಟೊವೇಟರ್, ಎಂ.ಬಿ.ಪೆÇ್ಲೀ ಹಾಗೂ ಪವರ್ ವೀಡರ್‍ಗಳ ವಿತರಣಾ ವಹಿಯನ್ನು ಪರಿಶೀಲಿಸಿದರು.

ಅದೇ ರೀತಿಯಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ವಿತರಿಸುತ್ತಿರುವ ಸ್ಪ್ರಿಂಕ್ಲರ್ ಬಗ್ಗೆ ಮಾಹಿತಿ ಪಡೆದು ವಿತರಣಾವಹಿಗಳನ್ನು ಪರಿಶೀಲಿಸಿದರು.

ಕಚೇರಿಯಲ್ಲಿ ನಿರ್ವಹಿಸುವ ವಿವಿಧ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಫಲಾನುಭವಿಗಳ ಮಾಹಿತಿ ಅನುಕ್ರಮವಾಗಿ ಇರದ ಮತ್ತು ಸರಿಯಾಗಿ ದಾಖಲಿಸದಿರುವದನ್ನು ಗಮನಿಸಿ, ಸರಿಯಾಗಿ ವರ್ಷವಾರು ಮಾಹಿತಿ ದಾಖಲಿಸುವಂತೆ ಎಚ್ಚರಿಕೆ ನೀಡಿದರು.

ಫೆಬ್ರವರಿ 1 ರಿಂದ ಆರ್.ಎಸ್.ಕೆ.ಗಳಲ್ಲಿ ರೈತರ ಬೇಡಿಕೆ ವಹಿ ಮತ್ತು ಕುಂದುಕೊರತೆ ವಹಿ ನಿರ್ವಹಣೆ ಕಡ್ಡಾಯ: ರೈತ ಸಂಪರ್ಕ ಕೇಂದ್ರವು ಕೃಷಿ ಇಲಾಖೆಯ ಕ್ಷೇತ್ರಮಟ್ಟದ ಕಚೇರಿ ಆಗಿದೆ. ನಿತ್ಯ ನೂರಾರು ರೈತರು ಕೇಂದ್ರಕ್ಕೆ ಬರುತ್ತಾರೆ. ಅವರ ಬೇಡಿಕೆಗಳನ್ನು ದಾಖಲಿಸಬೇಕು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಿ, ದಾಖಲಿಸಬೇಕು. ಇದರಿಂದ ರೈತರ, ಕೃಷಿ ವಲಯದ ಸಮಸ್ಯೆಗಳನ್ನು ಮೂಲದಲ್ಲಿ ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಾಳೆ ಫೆಬ್ರವರಿ 1 ರಿಂದ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿಗಳನ್ನು ಪ್ರತ್ಯೇಕವಾಗಿ ಕಡ್ಡಾಯವಾಗಿ ನಿರ್ವಹಿಸಬೇಕು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಕುರಿತು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಇಂದೇ ನಿರ್ದೇಶನ ನೀಡಬೇಕು ಎಂದರು.
ರೈತರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಜಿಲ್ಲೆಯಲ್ಲಿ ಪರಿಹರಿಸಲು ಕ್ರಮವಹಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಸರಕಾರಕ್ಕೂ ಸೂಕ್ತ ಕ್ರಮಕ್ಕಾಗಿ ಮಾಹಿತಿ ಸಲ್ಲಿಸಲು ಸಹಾಯವಾಗುತ್ತದೆ. ಪ್ರತಿ ಆರ್.ಎಸ್.ಕೆ.ದಲ್ಲಿ ಬೇಡಿಕೆ ಡಾಟಾ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ: ಜಿಲ್ಲೆಯ ವಿವಿಧ ತಾಲೂಕುಗಳ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಈ ರೀತಿಯಾಗಿ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ವಹಿಗಳನ್ನು, ಗೋದಾಮ ದಾಸ್ತಾನು ಪರಿಶೀಲಿಸುತ್ತೇನೆ ಮತ್ತು ರೈತರನ್ನು ಮಾತಾಡಿಸಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳ ಹಾಜರಾತಿ, ರೈತರೊಂದಿಗಿನ ಸ್ಪಂದನೆ ಮತ್ತು ಇಲಾಖೆ ಕಾರ್ಯಕ್ರಮ, ಯೋಜನೆಗಳು ಅರ್ಹರಿಗೆ ತಲುಪಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಎಲ್ಲರಿಗೂ ಕಚೇರಿ ಸಮಯದಲ್ಲಿ ಸರಿಯಾಗಿ ಹಾಜರಿದ್ದು, ನಿಯಯಮಾನುಸಾರ ಕರ್ತವ್ಯ ನಿರ್ವಹಿಸಲು ತಿಳಿಸಿ ಎಂದು ಕೃಷಿ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದ ಮುಗದ, ಮಂಡಿಹಾಳ, ಸಣ್ಣ ಸೋಮಾಪುರ ರೈತರನ್ನು ಮಾತನಾಡಿಸಿ, ಜಿಲ್ಲಾಧಿಕಾರಿಗಳು ರೈತ ಸಂಪರ್ಕ ಕೇಂದ್ರದ ಅನುಕೂಲತೆ ಹಾಗೂ ಅವರ ದೂರುಗಳ ಕುರಿತು ವಿಚಾರಿಸಿದರು. ರೈತ ಸಂಪರ್ಕ ಕೇಂದ್ರಗಳಲ್ಲಿರುವ ಸಿಬ್ಬಂದಿ ಕೊರತೆ ಇರುವದನ್ನು ಗಮನಿಸಿ, ಸರಕಾರದ ಗಮನಕ್ಕೆ ತರುವವದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರೈತರು, ಸಿಬ್ಬಂದಿಗಳು ಹಾಜರಿದ್ದರು.

  • Related Posts

    ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಸಭೆ…

    ಅಖಂಡ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋಟಾರಗಾರರ ಗ್ರಂಥ ಬಿಡುಗಡೆ

    ಧಾರವಾಡ ಜ.27: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರ ಆಶಯದಂತೆ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಸಲಹೆಯಂತೆ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಸುರೇಶ ಕೆ. ಪಿ. ಅವರ ಮಾರ್ಗದರ್ಶನದಲ್ಲಿ…

    Leave a Reply

    Your email address will not be published. Required fields are marked *

    error: Content is protected !!