*ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು ತಂದ ಕಲಾ ಮೇಳ*ಚಿತ್ರಕಲಾ ಪರಿಷತ್ತಿನಲ್ಲಿ ಕರಕುಶಲ ವೈಭವ – “ಇಂಡಿಯನ್ ಹಾತ್ ಫೆಸ್ಟಿವಲ್”

ಬೆಂಗಳೂರು,18;* ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕೈಮಗ್ಗ, ಕರಕುಶಲ ವಸ್ತುಗಳ ವೈಭವ “ಇಂಡಿಯನ್ ಹಾತ್ ಫೆಸ್ಟಿವಲ್” ಆರಂಭವಾಗಿದು.

ಹಬ್ಬದ ಅಂಗವಾಗಿ ಆ, 18 ರಿಂದ 27 ರ ವರೆಗೆ ದೇಶದ ಎಲ್ಲಾ ಭಾಗಗಳ ವಿಶೇಷ ವಿನ್ಯಾಸಗಳ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗಲಿದೆ.

ಉತ್ಪಾದಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಸುಲಭ ದರದಲ್ಲಿ ದೊರೆಯುತ್ತಿವೆ. ಅತ್ಯುತ್ತಮ ಗುಣಮಟ್ಟದ ಚಿತ್ತಾಕರ್ಷಕ ಬಣ್ಣ ಬಣ್ಣದ ವಸ್ತುಗಳು, ಸೀರೆ, ಬಟ್ಟೆ, ವಡವೆ, ಮನೆಗಳ ಅಂದ ಹೆಚ್ಚಿಸುವ ಬಿನ್ನ ವಿಭಿನ್ನ ಅಲಂಕಾರಿಕ ವಸ್ತುಗಳು ದೊರೆಯುತ್ತವೆ

ವೈವಿಧ್ಯಮಯ ಕೆತ್ತನೆಯ ಕಸೂರಿ ವಸ್ತುಗಳು, ಮಹಿಳೆಯರ ಅಂದ ಹೆಚ್ಚಿಸುವ ವಸ್ತುಗಳ ಮಾರಾಟಕ್ಕೆ ವೇದಿಕೆ ಸನ್ನದ್ಧವಾಗಿದೆ.

ಇನ್ನೂ ವಿಶೇಷವಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು ತರುವ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ

ಇನ್ನೂ ಇದು ನಿಜಕ್ಕೂ ವಿಶೇಷವಾದ ಮೇಳವಾಗಿದ್ದೆ  ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮೇಳ ವಿಶೇಷ ಮನ್ನಣೆ ಪಡೆದಿದೆ. ಬೇರೆ ಬೇರೆ ರಾಜ್ಯಗಳ ಜೀವನ ಶೈಲಿ ತಿಳಿಯಲು, ಅಲ್ಲಿನ ವಿಶೇಷತೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮೇಳ ಪೂರಕವಾಗಿದೆ ಎಂದು ಜೀವನ ಶೈಲಿ ಮೇಲೆ ಪ್ರಭಾವ ಬೀರುವ *ಕಲಾವಿದೆ ಜೀವಿತ ಜಗದೀಶ್ ಮೇಳಕ್ಕೆ ಚಾಲನೆ ನೀಡಿ ತಿಳಿಸಿದರು

ಮಹಿಳೆಯರು ಸೇರಿದಂತೆ ಶಾಲಾ  ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹ ಮೇಳದ ವೈಶಿಷ್ಟ್ಯಗಳ ಬಗ್ಗೆ ಮೆಚ್ಚುಗೆ ಜೊತೆಗೆ ಅಭಿಪ್ರಾಯವನ್ನು  ವ್ಯಕ್ತಪಡಿಸಿದರೆ.

  • Related Posts

    ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮದ ಅರಿವು ಮೂಡಿಸಿ ಅಪಘಾತ ತಪ್ಪಿಸಿ : ಜಿ.ಜಗದೀಶ್

    ಬೆಂಗಳೂರು ನಗರ ಜಿಲ್ಲೆ, ಜನವರಿ 31 ಬೆಂಗಳೂರು ನಗರದಲ್ಲಿ ಅತಿ ವೇಗದ ವಾಹನ ಚಾಲನೆಯಿಂದಾಗಿ ಅಪಘಾತ ಹೆಚ್ಚಾಗುತಿರುವ ಕಾರಣ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಅರಿವು ಮೂಡಿಸಿ ಎಂದು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ…

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಸಭೆ

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು…

    Leave a Reply

    Your email address will not be published. Required fields are marked *

    error: Content is protected !!