

ಕೆ ಆರ್ ಪೇಟೆ: ತಾಲ್ಲೂಕು ಕಿಕ್ಕೇರಿ ಹೋಬಳಿ ಬೋಳಮಾರನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಿರ್ಮಿಸಿರುವ ದಿನಾಂಕ 06:02:2025 ಗುರುವಾರ ರಿಂದ 08:02:2025 ಶನಿವಾರ ವರೆಗೆ ಶ್ರೀ ಲಕ್ಷ್ಮೀದೇವಮ್ಮನವರ ನೂತನ ದೇವಾಲಯ ಲೋಕಾರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ,ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ಕೃಷಿ ಸಚಿವ ಚಲುವರಾಯಸ್ವಾಮಿ, ಲೋಕಸಭಾ ಸದಸ್ಯರಾದ ಡಾ.ಸಿ ಎನ್ ಮಂಜುನಾಥ್, ಮಾಜಿ ಸಚಿವ ಸಿ ಎಸ್ ಪುಟ್ಟರಾಜು,ಹೆಚ್ ಡಿ ರೇವಣ್ಣ,ವಿಧಾನಸಭಾ ಸದಸ್ಯ ಹೆಚ್ ಟಿ ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ರೇವಣ್ಣ ,ನಿಖಿಲ್ ಕುಮಾರಸ್ವಾಮಿ,ಮನ್ಮುಲ್ ನಿರ್ದೇಶಕ ಡಾಲು ರವಿ, ಆರ್ ಟಿ ಒ ಅಧಿಕಾರಿ ಮಲ್ಲಿಕಾರ್ಜುನ್,ಕಿಕ್ಕೇರಿ ಟೈಗರ್ ಪ್ರಭಾಕರ್, ಬಿ ಎಂ ಕಿರಣ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಸೇರಿದಂತೆ ನಾಡಿನ ಖ್ಯಾತ ಗಣ್ಯರು ಆಗಮಿಸಲಿದರೆ.
ಈ ಸಂದರ್ಭದಲ್ಲಿ ತಾಲ್ಲೂಕಿನ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೋಳಮಾರನಹಳ್ಳಿ ಗ್ರಾಮಸ್ಥರಾದ ಶ್ರೀನಿವಾಸ್,ಸಮಾಜ ಸೇವಕ ಬಿ ಎಸ್ ಶಿವಲಿಂಗೇಗೌಡ,ಸರ್ವೆ ಮಂಜುನಾಥ್ ಮನವಿ ಮಾಡಿದರೆ.