ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿನೆ

ಕೇಂದ್ರ ಜಲಶಕ್ತಿ ತಂಡದ ನೋಡಲ್ ಅಧಿಕಾರಿ ಶ್ರೀ ಡಿ.ವಿ. ಸ್ವಾಮಿ (IAS) ಹಾಗೂ ಸೆಂಟ್ರಲ್ ಗ್ರೌಂಡ ವಾಟರ್ ಬೋರ್ಡ್ ವಿಜ್ಞಾನಿ ಡಾ.ಸುಚೇತನಾ ಬಿಸ್ವಾಸ್ ರವರು ಇಂದು ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಂದಕ ಕಾಮಗಾರಿ, ಕಲಕಾಂಬ ಗ್ರಾ.ಪಂ. ವ್ಯಾಪ್ತಿಯ GWM ಕಾಮಗಾರಿ, ಮುಚ್ಚಂಡಿ ಗ್ರಾ.ಪಂ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೆರೆ ನಿರ್ಮಾಣ ಕಾಮಗಾರಿಗೆ ಭೇಟಿ ನೀಡಿದರು.

ಖಾನಾಪೂರ ತಾಲ್ಲೂಕಿನ ರಾಮಗುರವಾಡಿ ಹಾಗೂ ಶಿಂಧೋಳಿ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಂದಕ ನಿರ್ಮಾಣ, ಕೃಷಿ ಹೊಂಡ, ಕೆರೆ ಹೂಳೆತ್ತುವುದು, ನಾಲಾ ನಿರ್ಮಾಣ ಹಾಗೂ ಅರಣ್ಯೀಕರಣ ಕಾಮಗಾರಿಗಳನ್ನು ಪರಿಶೀಲಿಸಿದರು ಹಾಗೂ ಅವುಗಳಿಂದ ಉಂಟಾಗಿರುವ ಪ್ರಯೋಜನಗಳ ಬಗ್ಗೆ ಅಧಿಕಾರಿಗಳು, ಕೂಲಿಕಾರರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಜಿ.ಪಂ. ಯೋಜನಾ ನಿರ್ದೇಶಕರಾದ ಶ್ರೀ ರವಿ ಬಂಗಾರೆಪ್ಪನವರ ಖಾನಾಪೂರ ತಾಲ್ಲೂಕಿನ ತಾಪಂ. ಸಹಾಯಕ ನಿರ್ದೇಶಕರಾದ (ಗ್ರಾಉ) ಶ್ರೀಮತಿ ರೂಪಾಲಿ ಬಡಕುಂದ್ರಿ ಜಿ.ಪಂ. ADPC, DIEC, DMIS, PDO, TC, TIEC, TA (ಸಿವಿಲ್ ಮತ್ತು ಅರಣ್ಯ) ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

  • Related Posts

    ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

    ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಶ್ರೀ ಗಳು ಚಾಲನೆ ನೀಡಿದರು, ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ…

    ಅಥಣಿ ತಾಲೂಕಿನ ಅಭಿವೃದ್ಧಿಗಾಗಿ ನಿರ್ಮಲಾಸೀತಾರಾಮನ್ ಕೇಂದ್ರಬಜೆಟ್ ನಲ್ಲಿ ಈಡೇರಿಸುತ್ತಾ?

    ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ನಿರ್ಮಲಾಸೀತಾರಾಮನ್ ಕೇಂದ್ರಬಜೆಟ್ 2025 ಬಜೆಟ್ ಮಂಡಿಸಲಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಬಹಳ ದಿನಗಳ ಬೇಡಿಕೆ ಗಮನಹರಿಸುತ್ತಾರೆ ? ಈಡೇರಿಸುತ್ತಾ? ಕಾದುನೋಡಬೇಕಿದ್ದೆ…. ಅಥಣಿ ತಾಲೂಕಿನಲ್ಲಿ ಬಹಳ ದಿನಗಳ ಅಭಿವೃದ್ಧಿ…

    Leave a Reply

    Your email address will not be published. Required fields are marked *

    error: Content is protected !!