ವಿಶ್ವ ರೋಗಿಗಳ ಸುರಕ್ಷತಾ ದಿನದಲ್ಲಿ ಟಿಹೆಚ್‍ಒ ಡಾ.ಬಿ.ವಿ.ಗಿರೀಶ್ ಸಲಹೆಗುಣಮಟ್ಟದ ಸೇವಾ ಭರವಸೆ ಮೂಲಕ ರೋಗಿಗಳ ಸುರಕ್ಷತೆ ಕಾಪಾಡೋಣ


ಚಿತ್ರದುರ್ಗ ಸೆ.16: ಗುಣಮಟ್ಟದ ಸೇವಾ ಭರವಸೆಯ ಮೂಲಕ ರೋಗಿಗಳ ಸುರಕ್ಷತೆ ಕಾಪಾಡೋಣ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ-ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ವಿಶ್ವ ರೋಗಿಗಳ ಸುರಕ್ಷತಾ ದಿನ ಅಂಗವಾಗಿ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಗುಣಮಟ್ಟದ ಸೇವಾ ಭರವಸೆಯ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶ್ವರೋಗಿಗಳ ಸುರಕ್ಷತಾ ದಿನ 2019 ರಿಂದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಪ್ರತಿ ವರ್ಷ ಒಂದೊಂದು ಘೋಷವಾಕ್ಯದಂತೆ ಸೆಪ್ಟೆಂಬರ್ 17ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ರೋಗಿಗಳ ಸುರಕ್ಷತೆಯು ಜಾಗತಿಕ ಆರೋಗ್ಯದ ಆದ್ಯತೆಯಾಗಿದೆ ಎಂದು ಗುರುತಿಸಿ, ವಾರ್ಷಿಕವಾಗಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಸ್ಥಾಪಿಸುವುದನ್ನು ಅನುಮೋದಿಸಿತು. ಸೆಪ್ಟೆಂಬರ್ 17 ರಂದು ಮೊದಲ ವಿಶ್ವ ರೋಗಿಗಳ ದಿನವನ್ನು 2019 ರಲ್ಲಿ ಆಚರಿಸಲಾಯಿತು ಎಂದರು.


ರೋಗಿಗಳ ಸುರಕ್ಷತೆಯು ಆರೋಗ್ಯ ರಕ್ಷಣೆಯ ಶಿಸ್ತಾಗಿದ್ದು, ಇದು ಆರೋಗ್ಯ ರಕ್ಷಣಾ ವ್ಯವಸ್ಥೆಗಳಲ್ಲಿನ ಸಂಕೀರ್ಣತೆ ಮತ್ತು ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ರೋಗಿಗಳ ಹಾನಿಯ ಪರಿಣಾಮವಾಗಿ ಹೊರಹೊಮ್ಮಿತು. ಆರೋಗ್ಯ ರಕ್ಷಣೆಯ ಸಮಯದಲ್ಲಿ ರೋಗಿಗಳಿಗೆ ಸಂಭವಿಸುವ ಅಪಾಯಗಳು, ದೋಷಗಳು ಮತ್ತು ಹಾನಿಯನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವುದು ಇದರ ಗುರಿಯಾಗಿದೆ. ದೋಷಗಳು ಮತ್ತು ಪ್ರತಿಕೂಲ ಘಟನೆಗಳಿಂದ ಕಲಿಕೆಯ ಆಧಾರದ ಮೇಲೆ ನಿರಂತರ ಸುಧಾರಣೆ ಶಿಸ್ತಿನ ಮೂಲಾಧಾರವಾಗಿದೆ ಎಂದರು.


ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಗಳನ್ನು ತಲುಪಿಸಲು ರೋಗಿಗಳ ಸುರಕ್ಷತೆಯು ಮೂಲಭೂತವಾಗಿದೆ. ವಾಸ್ತವವಾಗಿ, ಪ್ರಪಂಚದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳು ಪರಿಣಾಮಕಾರಿ, ಸುರಕ್ಷಿತ ಮತ್ತು ಜನ-ಕೇಂದ್ರಿತವಾಗಿರಬೇಕು ಎಂಬ ಸ್ಪಷ್ಟ ಒಮ್ಮತವಿದೆ. ಜೊತೆಗೆ, ಗುಣಮಟ್ಟದ ಆರೋಗ್ಯ ಸೇವೆಯ ಪ್ರಯೋಜನಗಳನ್ನು ಅರಿತುಕೊಳ್ಳಲು, ಆರೋಗ್ಯ ಸೇವೆಗಳು ಸಮಯೋಚಿತ, ಸಮಾನ, ಸಮಗ್ರ ಮತ್ತು ದಕ್ಷವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ, ಎಲ್ಲಾ ಉಪ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರೆಡ್ಡಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಆಶಾ ಕಾರ್ಯಕರ್ತೆಯರು, ರೋಗಿಗಳು ಇದ್ದರು.

ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು

  • Related Posts

    ಆಯುಷ್ ಇಲಾಖೆಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

    ಚಿತ್ರದುರ್ಗ ಜ.31:ಆರೋಗ್ಯ ರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದ್ದು, ನಮ್ಮ ನಿತ್ಯ ಕೆಲಸಗಳ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು. ನಗದ ವಕೀಲರ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಂಗ…

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದ ಡಿ.ಸುಧಾಕರ್

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆಪ್ರಸಕ್ತ ವರ್ಷವೇ ಜಿಲ್ಲೆಯ 21 ಸ್ಥಳಗಳಲ್ಲಿ ವಿದ್ಯುತ್ ವಿತರಣೆ ಉಪಕೇಂದ್ರಗಳ ನಿರ್ಮಾಣ ಚಿತ್ರದುರ್ಗ ಜ.27:ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯ 21 ವಿದ್ಯುತ್ ವಿತರಣ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡವಿದೆ. ಇವುಗಳಿಗೆ ನಿರ್ವಹಣೆಗೆ ಉಪ ವಿದ್ಯುತ್…

    Leave a Reply

    Your email address will not be published. Required fields are marked *

    error: Content is protected !!