ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ನಾಡಕಚೇರಿ , ಗ್ರಾಮ ಆಡಳಿತಾಧಿಕಾರಿ ಹಾಗೂ ತಹಸಿಲ್ದಾರ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ; ಇಲಾಖಾ ಕಾರ್ಯಗಳ ಪರಿಶೀಲನೆ.

ಧಾರವಾಡ ಸೆ.14: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಇಲಾಖೆ ಪ್ರಗತಿ ಪರಿಶೀಲನೆಗಾಗಿ ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ್ದಾರೆ.

ಬೆಳಿಗ್ಗೆಯಿಂದ ವಿವಿಧ ಕಂದಾಯ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಇಲಾಖೆ ಸಾರ್ವಜನಿಕರಿಗೆ ನೀಡುವ ವಿವಿಧ ಸೇವೆಗಳ ಗುಣಮಟ್ಟ, ಕಾಲಮಿತಿ ಅನುμÁ್ಠನ, ಜನಸ್ನೇಹಿ ಮತ್ತು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಿಬ್ಬಂದಿಗಳ ಅನುಭವ ತಿಳಿಯಲು ಸ್ವತಃ ಗ್ರಾಮ ಆಡಾಳಿತಾಧಿಕಾರಿ ಕಚೇರಿ, ನಾಡಕಚೇರಿ ಮತ್ತು ತಹಸಿಲ್ದಾರ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಸಂಬಂಧಿಸಿದ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಧಾರವಾಡದಿಂದ ಹೊರಟ ಕಂದಾಯ ಸಚಿವರು ಮೊದಲಿಗೆ ದುಮ್ಮವಾಡ ಉಪತಹಸಿಲ್ದಾರ ಇರುವ ನಾಡಕಚೇರಿಗೆ ತೆರಳಿದರು.

ಅಲ್ಲಿನ ಸಿಬ್ಬಂದಿಗಳಿಂದ ಕಂದಾಯ ಇಲಾಖೆಯ ಸೇವೆಗಳು, ಜನರಿಗೆ ತಲುಪಿಸುವಲ್ಲಿ ಆಗುವ ತಾಂತ್ರಿಕ ಸಮಸ್ಯೆ, ಕೆಲಸದಲ್ಲಿ ಬರುವ ಸಾಮಾನ್ಯ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುವ ಪರಿಹಾರಗಳ ಕುರಿತು ಮಾಹಿತಿ ಪಡೆದರು.

ಪಿಂಚಣಿ, ಈ-ಸ್ವತ್ತು, ಸರ್ವೆಗಳ ದಾಖಲಾತಿ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ಕುರಿತು ಸಚಿವರು, ಅಧಿಕಾರಿಗಳ ಗಮನ ಸೆಳೆದರು. ಮತ್ತು ರೈತರಿಗೆ ತಾಂತ್ರಿಕ ವಿಳಂಬ ಹಾಗೂ ಅವುಗಳ ಪರಿಹಾರ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ಅಲ್ಲಿಂದ ಹಿರೇಹೊನ್ನಳ್ಳಿ ಗ್ರಾಮಕ್ಕೆ ತೆರಳಿ, ಅಲ್ಲಿನ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ದಿನನಿತ್ಯದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರೈತರ ಸಾಗುವಳಿ ಚೀಟಿ, ಹಿಡುವಳಿಗಳ ವಹಿ ನಿರ್ವಹಣೆ, ರೈತರ ಜಮೀನುಗಳ ಕಾಲಂ ಎಂಟ್ರಿ ಕುರಿತು ತಲಾಠಿಯಿಂದ ತಿಳಿದುಕೊಂಡು, ಅದರಲ್ಲಿ ಅಗತ್ಯವಿರುವ ಸುಧಾರಣೆಗಳನ್ನು ತಿಳಿಸಿದರು.

ಹಿರೇಹೊನ್ನಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ವಿವಿಧ ಸರಕಾರಿ ಕಚೇರಿ, ಸೌಲಭ್ಯಗಳು ಇರುವುದನ್ನು ಕಂಡು ಸಂತಸ ವ್ಯಕ್ತಪಡಿಸಿ, ಈ ರೀತಿಯಲ್ಲಿ ಗ್ರಾಮ ಆಡಳಿತಸೌಧ ನಿರ್ಮಿಸುವುದರಿಂದ ಗ್ರಾಮಸ್ಥರಿಗೆ ಎಲ್ಲ ಸೇವೆಗಳು ಒಂದೇ ಸೂರಿನಡಿ ಸಿಗುತ್ತವೆ. ಈ ಕುರಿತು ಪರಿಶೀಲಿಸಿ ಕ್ರಮವಹಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.

ಅಲ್ಲಿಂದ ನೇರವಾಗಿ ಸಚಿವರು ಹುಬ್ಬಳ್ಳಿ ತಹಸಿಲ್ದಾರ ಕಚೇರಿಗೆ ತೆರಳಿ, ದಿಢೀರ್ ಪರಿಶೀಲನೆ ಕೈಗೊಂಡರು. ಸಾರ್ವಜನಿಕರ ಕುಂದುಕೊರತೆ, ಟಪಾಲು ಸ್ವೀಕರಿಸುವ ಕೇಂದ್ರಕ್ಕೆ ಭೇಟಿ ನೀಡಿ, ಟಪಾಲು ವಿಲೇವಾರಿ ಆಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿಚಾರಿಸಿ, ಕಚೇರಿಯಲ್ಲಿ ಕಡ್ಡಾಯವಾಗಿ ಇ- ಆಫೀಸ್ ಅಳವಡಿಸಿಕೊಳ್ಳಲು ತಹಸಿಲ್ದಾರ ಅವರಿಗೆ ನಿರ್ದೇಶಿಸಿದರು. ನಂತರ ಉಪನೋಂದಣಿ ಅಧಿಕಾರಿಗಳ ಕಚೇರಿ, ರೆಕಾರ್ಡ್ ರೂಮ್ ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಬರುವ ಅಕ್ಟೋಬರ್ 1 ರೊಳಗೆ ತಹಸಿಲ್ದಾರ ಹಂತದವರೆಗೆ ಎಲ್ಲ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಸೂಚಿಸಿದರು. ರೆಕಾರ್ಡ್ ರೂಮ್ ನ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಆರಂಭವಾಗಲಿದೆ. ಈ ಕುರಿತು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಸಚಿವರ ಈ ಪ್ರವಾಸ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಭೂದಾಖಲೆಗಳ ವಿಭಾಗದ ಜಿಲ್ಲಾ ಉಪನಿರ್ದೇಶಕ ಮೋಹನ ಶಿವಣ್ಣನವರ, ತಹಸಿಲ್ದಾರ ದೊಡ್ಡಪ್ಪ ಹೂಗಾರ, ಕಲ್ಲಗೌಡ ಪಾಟೀಲ, ಪ್ರಕಾಶ ನಾಶಿ, ಯಲ್ಲಪ್ಪ ಗೊಣೆನ್ನವರ, ಸುಧೀರ ಸಾಹುಕಾರ, ಗ್ರೇಡ್2 ತಹಸಿಲ್ದಾರ ಶ್ರವಣ ಕೊಚ್ಚರಗಿ, ಶಿವಾನಂದ ಹೆಬ್ಬಳ್ಳಿ, ಜಿ.ವಿ.ಪಾಟೀಲ, ಉಪತಹಸಿಲ್ದಾರ ದಾನೇಶ ಬೆಲೂಡಿ, ಪ್ರವೀಣ ಪೂಜಾರ, ರಮೇಶ ಬಂಡಿ, ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ನಾಸೀರ ಅಮರಗೋಳ, ಪಿ.ಎನ್.ಶಿವಳ್ಳಿಮಠ, ರವಿ ಬೆನ್ನೂರ, ಐ.ಎಪ್.ಐಯ್ಯನಗೌಡರ ಸೇರಿದಂತೆ ಇತರರು ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು

  • Related Posts

    ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ;

    ಜಿಲ್ಲೆಯ ಪ್ರತಿ ಆರ್.ಎಸ್ ಕೆ.ದಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿ ನಿರ್ವಹಿಸಲು ನಿರ್ದೇಶನ ನೀಡಿದ ಡಿಸಿ. ಧಾರವಾಡ ಜ.31: ಇಂದು ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ…

    ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಸಭೆ…

    Leave a Reply

    Your email address will not be published. Required fields are marked *

    error: Content is protected !!