

ದಾವಣಗೆರೆ:ಸೆ.07- ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಾಮಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪೋಷಕರ ಅಮೋಘ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳು ರಾಧೆ ಕೃಷ್ಣನ ವೇಷದೊಂದಿಗೆ ಶಾಲೆಗೆ ಆಗಮಿಸಿ ಎಲ್ಲರ ಗಮನ ಸೆಳೆದರು.

ರಾಧೆಯಾದ ವಿದ್ಯಾರ್ಥಿನಿಯರಿಗೆ ಕೃಷ್ಣನ ಪಾತ್ರದಲ್ಲಿ ಬಂದ ವಿದ್ಯಾರ್ಥಿಗಳು ಸಾಥ್ ನೀಡಿದರು. ಶ್ರೀಕೃಷ್ಣನ ಹಲವು ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಶ್ರೀಕೃಷ್ಣನನ್ನ ಸ್ಮರಿಸಿದರು. ಪುಟ್ಟ ಪಟಾಣಿಗಳು ಶ್ರೀಕೃಷ್ಣನಂತೆ ಕಂಗೊಳಿಸುವ ಮೂಲಕ ಶಾಲಾ ವಾತಾವರಣವೇ ಹಬ್ಬದಂತೆ ಮಾರ್ಪಟ್ಟಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇದೇ ಸಂಸ್ಥೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕಿ ಶ್ರೀಮತಿ ರೂಪರಾಣಿ ವಹಿಸಿಕೊಂಡಿದ್ದರು.

ಅತಿಥಿಗಳಾಗಿ ಪೋಷಕರಾದ ಶ್ರೀಮತಿ ಮಮತಾ ಹಾಗೂ ಶ್ರೀಮತಿ ಮಂಗಳ ಗೌರಿ ಆಗಮಿಸಿದ್ದರು. ಈ ವೇಳೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಗೌರವ ಕಾರ್ಯದಶಿಗಳಾದ ಕೆ.ಎಂ ಸುರೇಶ್, ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಧ್ಯಾಯರಾದ ಪ್ರಕಾಶ್, ಶ್ರೀಮತಿ ಗಾಯತ್ರಿ, ಶ್ರೀಮತಿ ಮಾಲಾ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.