

ದಾವಣಗೆರೆ(ಆ28)..
ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು, ಜುಲೈ ೨ರಿಂದ ದೇಶದ ೧೪ ರಾಜ್ಯಗಳನ್ನು ಸುತ್ತಿ ೪೭ಪ್ರದರ್ಶನ ನೀಡಿರುವ ಬಸವಣ್ಣನವರ ಆಯ್ದ ೪೪ ವಚನಗಳ ಆಧಾರಿತ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯರೂಪಕ ಪ್ರದರ್ಶನ ಭಾರತದ ಪ್ರಥಮ ವಚನ ಸಂಸ್ಕೃತಿ ಅಭಿಯಾನವು ಸೆಪ್ಟೆಂಬರ್ ೨ರಂದು ಸಾಣ್ಣೇಹಳ್ಳಿಯಲ್ಲಿ ಸಮಾರೋಪವಾಗಲಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು
ನಗರದ ಬಿಐಇಟಿ ಆವರಣದ ಎಸ್. ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯರೂಪಕ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಹಿರಿಯ ಗುರುಗಳು ಶರಣರ ತತ್ವಗಳನ್ನು ಸಮಾಜದಲ್ಲಿ ಬಿತ್ತಲು ನಾನಾ ಪ್ರಯೋಗಗಳನ್ನು ಮಾಡಿದ್ದರು. ಅವರಿಂದ ಪ್ರೇರಣೆ ಪಡೆದ ನಾವು ರಂಗಭೂಮಿಯ ಮೂಲಕ ನಾನಾ ರಂಗ ಚಟುವಟಿಕೆಗಳ ಮೂಲಕ ಬಸವಣ್ಣನವರ ತತ್ವಾದರ್ಶಗಳನ್ನು ಸಾರುತ್ತಿದ್ದೇವೆ. ನೀನಲ್ಲದೆ ಮತ್ತಾರೂ ಇಲ್ಲವಯ್ಯಾ' ಕನ್ನಡ ವಚನ ನೃತ್ಯರೂಪಕವನ್ನು
ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ಅಂತಾ ಹಿಂದಿಗೆ ಭಾಷಾಂತರಿಸಿ, ೧೪ ರಾಜ್ಯಗಳನ್ನು ಸುತ್ತಿದ ಕಲಾವಿದರು ೪೭ ಪ್ರದರ್ಶನ ನೀಡಿದ್ದಾರೆ. ಇದೊಂದು ರೋಚಕ ಅನುಭವ ನೀಡಿದ್ದರ ಜತೆಗೆ, ಕಲಾವಿದರು ಅನೇಕ ತಳಮಳ, ನೋವುಗಳೊಂದಿಗೆ ಯಶಸ್ವಿಯಾಗಿ ಪ್ರದರ್ಶಿಸಿದ್ದುö, ಇದನ್ನು ಮೆಚ್ಚಿ ಪ್ರಧಾನಿ ಮೋದಿಯವರು ಪತ್ರ ಬರೆದಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಅವರು ಹಳ್ಳಿಯ ಮಹಿಳೆಯರಿಗೂ ರಂಗ ತರಬೇತಿ ನೀಡಬೇಕು” ಎಂದು ಸಲಹೆ ನೀಡಿದರು.

ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ವಚನ ನೃತ್ಯರೂಪಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಉದ್ಯಮಿ ಎಸ್.ಎಸ್. ಗಣೇಶ್, ಜಿಲ್ಲಾಕಾರಿ ಡಾ. ಎಂ.ವಿ. ವೆಂಕಟೇಶ್, ಉದ್ಯಮಿಗಳಾದ ಅಥಣಿ ವೀರಣ್ಣ, ಬಿ.ಸಿ. ಉಮಾಪತಿ, ಸಹಕಾರಿ ಧುರೀಣ ಜೆ. ಆರ್. ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ರವಿಚಂದ್ರ, ಡಾ.ಎಂ.ಜಿ. ಈಶ್ವರಪ್ಪ, ಪ್ರೊ. ವೈವೃಷಬೇಂದ್ರಪ್ಪ ಮತ್ತಿತರರಿದ್ದರು.